ಶುಕ್ರವಾರ, ಸೆಪ್ಟೆಂಬರ್ 11, 2009



ಹೂ ಹಕ್ಕಿಯ ಮಧುಪಾನ....



ಗುಬ್ಬಚ್ಚಿಗಿಂತಲೂ ಚಿಕ್ಕದಾದ ಹೂ ಹಕ್ಕಿಗಳು (sun bird) ಹೂವಿನ ಮೇಲೆ ಕುಳಿತು ರಸ ಹೀರುವು



ದು ತುಂಬಾ ಆಕರ್ಷಕ. ನೀಲಿ ಬೆನ್ನಿನ ಹೂ ಹಕ್ಕಿ ಜೋಡಿಯೊಂದು ರಸ ಹೀರುವಾಗ ಕ್ಯಾಮೆರಾದಲ್ಲಿ



ಸೆರೆಯಾದವು. ಸೆರೆ ಸಿಕ್ಕ ಆ ಹಕ್ಕಿಗಳು ಇಲ್ಲಿವೆ...ನೋಡಿ ಒಮ್ಮೆ...





ಗಂಡು ಹೂ ಹಕ್ಕಿ







ಹೆಣ್ಣು ಹೂ ಹಕ್ಕಿ







ಆಹಾ.. ಎಷ್ಟು ರುಚಿಯಾಗಿದೆ ಈ ಹೂವಿನ ರಸ..







ಈ ಹೂವಿನ ರುಚಿ ನೋಡೋಣ ಅಂದ್ರೆ ಈ ಕೊಂಬೆ ನನ್ನ ಭಾರಾನೇ ತಡ್ಕೊಳಲ್ಲಾ ಅನ್ನುತ್ತಲ್ರೀ...







ಛೆ..ಏನ್ ಗಾಳೀನೋ..ಆರಾಮವಾಗಿ ಜ್ಯೂಸ್ ಕುಡಿಯೋಕೂ ಬಿಡಲ್ಲ..







ಲೋ..ಯಾರೋ ನಿನ್ನ ಫೋಟೋ ತೆಗೀತಿದಾರೆ ಕಣೋ..







ಯಾವನ್ಲಾ ಅವ್ನು ನನ್ನ್ನ ಫೋಟೋ ತೆಗಿಯೋನು...







ತೆಕ್ಕೊಳ್ಳಿ ಬಿಡೇ..ನಮ್ಮ ಪಾಡಿಗೆ ನಾವು ಜ್ಯೂಸ್ ಕುಡಿಯೋಣ..







ಈ ಹೂವಿನ ಟೇಸ್ಟ್ ತುಂಬಾ ಚೆನ್ನಾಗಿದೆ ಕಣೋ..







ನಿನಗೆ ಹೀಗೆ ಕುಳಿತು ರಸ ಹೀರೋಕೆ ಬರುತ್ತೇನೇ..!?







ಯಾಕೋ ಬರಲ್ಲಾ..ನಾನು ನಿನಗಿಂತ ಯಾವುದ್ರಲ್ಲೂ ಕಡೆಮೆ ಇಲ್ಲ ತಿಳೀತಾ...







ಲೇ..ಹೊರಟೇ ಬಿಟ್ಯೇನೇ..ನಾನೂ ಬರ್ತೀನಿ ತಡಿಯೇ...

















ಗುರುವಾರ, ಆಗಸ್ಟ್ 27, 2009


ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...


ಮಳೆ ಹನಿ ಇಳೆಯನ್ನು ಒದ್ದೆ ಮುದ್ದೆ ಮಾಡಿದರೆ ಇಬ್ಬನಿ ನೀರ ಹನಿ ಚಿಮುಕಿಸಿ ವಸುಂಧರೆಯನ್ನ


ಪುಳಕಿತಗೊಳಿಸುತ್ತದೆ. ಆದರೆ ಈ ಎರಡೂ ನೀರ ಹನಿಗಳು ಪ್ರಕೃತಿಯಲ್ಲಿ ಮುತ್ತಿನ ತೋರಣವನ್ನೇ


ಕಟ್ಟುತ್ತವೆ. ಈ ಮುತ್ತುಗಳ ಆಯುಷ್ಯ ಅತ್ಯಲ್ಪವಾದರೂ ಅವುಗಳ ಸೌಂದರ್ಯ ಅನನ್ಯ! ನೇಸರನ


ನೋಟಕ್ಕೆ ನಾಚಿ ನೀರಾಗುವ ಈ ಮುತ್ತುಗಳನ್ನು ನೋಡುವುದೇ ಆನಂದ.


ಈ ಅತ್ಯಮೂಲ್ಯ ಮುತ್ತುಗಳನ್ನು ಕ್ಯಾಮೆರಾದಲ್ಲಿ ಮೊಗೆದು ಮುತ್ತಿನ ಹಾರ ಕಟ್ಟುವ ಪುಟ್ಟ


ಪ್ರಯತ್ನ ಇಲ್ಲಿದೆ...


ಮುತ್ತು ಮುತ್ತು ನೀರ ಹನಿಯ ಥೋಂ ಥ ಥನನಂ...




ಆಹಾ ಮುತ್ತಿನ ಹನಿಗಳೇ ಎತ್ತಣ ಹೊರಟಿರುವಿರಿ ಸಾಲು ಹಿಡಿದು...




ನೇಸರನ ನಿರೀಕ್ಷೆಯಲ್ಲಿರುವ ಚಿಗುರೆಲೆಗೆ ನೀರಹನಿಯ ಸಿಹಿ ಮುತ್ತುಗಳು..!?




ಇಬ್ಬನಿ ತಬ್ಬಿದ ಎಲೆಯಲಿ ರವಿತೇಜ ಕಣ್ಣ ತೆರೆದು...




ನೇಸರನ ಸ್ವಾಗತಕ್ಕೆ ಎಲೆಯ ತೋರಣ..ಇಬ್ಬನಿಯ ಓರಣ...




ಮೊಗ್ಗಿಗೆ ಇಬ್ಬನಿಯ ಸಿಹಿ ಚುಂಬನ....ಆಲಿಂಗನ...




ಚಿಗುರೆಲೆಯ ಬೆಳಗಿನ ಶೃಂಗಾರಕ್ಕೆ ಇಬ್ಬನಿಯ ಸಿಂಧೂರ...




ಜಾರಿ ಹೋಗದಿರು ಗೆಳೆಯಾ ಭೂರಮೆಯಲ್ಲಿ ಕರಗಿ ಬಿಟ್ಟೀಯಾ...




ಕಥೆ ಕಥೆ ಕಾರಣ...ಮುತ್ತಿನ ತೋರಣ....




ಹನಿ..ಹನಿ..ಇಬ್ಬನಿ ನಿನ್ನ ಬಾಚಿ ಕುಡಿಯೋ ಆಸೆ....




ಪ್ರಿಯತಮೇ ಕೇಳ ಬೇಡ ಈ ಮುತ್ತುಗಳನ್ನು ಸರದಲ್ಲಿ ಪೊಣಿಸಿ ಕೊಡು ಎಂದು...




ಬೆಲೆ ಕಟ್ಟಲಾಗದ ಈ ಮುತ್ತಿಗೆ ಮುಳ್ಳುಗಳ ರಕ್ಷಣೆ...




ಎಲೆಯಂಚಿನಲ್ಲಿ ಮಿನುಗುತ್ತಿರುವ ಪುಟ್ಟ ನೇಸರ...!?




ಇಬ್ಬನಿಯ ಮಳೆಯೇ ಏನು ನಿನ್ನ ಹನಿಗಳ ಲೀಲೆ....




ಜಾರಿ ಬೀಳುವ ಮೊದಲೇ ಸರದಲ್ಲಿ ಪೊಣಿಸಿಕೊಂಡು ಬಿಡಿ...!




ಜೇಡ, ಇಬ್ಬನಿ ಸೇರಿ ಮಾಡಿದ ಈ ನೆಕ್ಲೇಸ್ ನ ಬೆಲೆ ಎಷ್ಟೋ...!?





ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ....










ಗುರುವಾರ, ಜೂನ್ 25, 2009



ICC World Twenty20 England '09 exclusively on YAHOO! CRICKET



ICC World Twenty20 England '09 exclusively on YAHOO! CRICKET



ICC World Twenty20 England '09 exclusively on YAHOO! CRICKET

ಸೋಮವಾರ, ಜೂನ್ 15, 2009



Explore and discover exciting holidays and getaways with Yahoo! India Travel Click here!

ಭಾನುವಾರ, ಜೂನ್ 14, 2009



Explore and discover exciting holidays and getaways with Yahoo! India Travel Click here!



Explore and discover exciting holidays and getaways with Yahoo! India Travel Click here!

ಶನಿವಾರ, ಮೇ 16, 2009



Explore your hobbies and interests. Click here to begin.

ಶುಕ್ರವಾರ, ಮೇ 15, 2009



Explore and discover exciting holidays and getaways with Yahoo! India Travel Click here!

ಮಂಗಳವಾರ, ಏಪ್ರಿಲ್ 7, 2009



Add more friends to your messenger and enjoy! Invite them now.



Check out the all-new Messenger 9.0! Click here.

ಭಾನುವಾರ, ಮಾರ್ಚ್ 22, 2009




ಸೂರ್ಯಾಸ್ತ ನೋಡಿ ಒಮ್ಮೆ ಕೈಲಾಸ ಗುಡ್ಡದಿಂದ...
ಉತ್ತರಕನ್ನಡ ಜಿಲ್ಲೆಯನ್ನು ನಿಸರ್ಗಸೌಂದರ್ಯ ಆರಾಧಾಕರ ಸ್ವರ್ಗ್ಸ ಎಂದೇ ಹೆಳಬಹುದು. ಇಲ್ಲಿ ಹೆಜ್ಜೆ ಹೆಜ್ಜೆಗೊಂದು
ಜಲಪಾತ ಹಾಗೂ ಸಣ್ಣ ಸಣ್ಣ ಗಿರಿಧಾಮಗಳು ಸಿಗುತ್ತವೆ. ಒಂದನ್ನೊಂದು ಮೀರಿಸುವಂತಹ ಸೌಂದ್ರರ್ಯ ಅವುಗಳದು.
ಶಿರಸಿ ತಾಲೂಕಿನ ತಾರಗೋಡ ಸಮೀಪದ ಕೈಲಾಸ ಗುಡ್ಡವೂ ಅಂತಹ ಗಿರಿಧಾಮಗಳಲ್ಲಿ ಒಂದು.
ಈ ಗುಡ್ಡದ ಮೇಲಿರುವ ಒಂದು ಕಲ್ಲಿನ ಮೇಲೆ ಒಂದು ಶಿವಲಿಂಗದ ಕೆತ್ತನೆಯಿದೆ. ಹಾಗಾಗಿ ಈ ಗುಡ್ಡಕ್ಕೆ ಕೈಲಾ
ಸ ಗುಡ್ಡ ಎಂದು ಹೆಸರು. ಅನಾದಿ ಕಾಲದಲ್ಲಿ ಯಾರೋ ಅನಾಮಿಕ ಕೆತ್ತಿದ ಶಿವಲಿಂಗವಿದು. ಈ ಶಿವನ ಪಕ್ಕದಲ್ಲೇ ಬಾ
ವಿಯ ಕುರುಹೂ ಇದೆ. ಈ ಶಿವನಿಗೆ ನಿತ್ಯ ಪೂಜೆ ಇಲ್ಲವಾದರೂ ಶಿವರಾತ್ರಿಯಂದು ಸ್ಥಳೀಯರು ಇಲ್ಲಿ ಪೂಜೆ ಸಲ್ಲಿಸು
ತ್ತಾರೆ. ಆ ದಿನ ತಕ್ಕ ಮಟ್ಟಿಗೆ ಪ್ರವಾಸಿಗರೂ ಕೈಲಾಸ ಗುಡ್ಡಕ್ಕೆ ಬಂದು ಶಿವನ ದರ್ಶನ ಪಡೆಯುತ್ತಾರೆ. ಈ ಶಿವಲಿಂಗ
ಕ್ಕೆ ಬಿಸಿಲು, ಗಾಳಿ, ಮಳೆಯಿಂದ ರಕ್ಷಣೆಯಿಲ್ಲವಾದರಿಂದ ಶಿಥಿಲಾವಸ್ಥೆಯಲ್ಲಿದೆ.


ಕೈಲಾಸ ಗುಡ್ಡ ಸಮುದ್ರ ಮಟ್ಟದಿಂದ 674 ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಸುತ್ತಲಿನ ಬೆಟ್ಟ ಗುಡ್ಡ, ಕಾಡು ಹಾ
ಗೂ ಅಡಿಕೆ ತೋಟ ಮನಮೋಹಕವಾಗಿ ಕಾಣಿಸುತ್ತದೆ. ಇಲ್ಲಿನ ಸೂರ್ಯಾಸ್ತದ ಸವಿಯನ್ನಂತೂ ಬಣ್ಣಿಸಲಸಾಧ್ಯ.
ಸೂರ್ಯಾಸ್ತದ ವೇಳೆ ಗುಡ್ಡದ ತುಂಬೆಲ್ಲಾ ಆವರಿಸುವ ಹೊಂಬೆಳಕು ವಿಶಿಷ್ಟ ಅನುಭವವನ್ನು ನೀಡುತ್ತದೆ.
ಸುತ್ತಲಿನ ದೃಶ್ಯ ಹೂಗೂ ಸೂರ್ಯಾಸ್ತ ವೀಕ್ಷಣೆಗೆ ಅರಣ್ಯ ಇಲಾಖೆಯವರು ವೀಕ್ಷಣಾ ಗೋಪುರ ನಿರ್ಮಿಸಿದ್ದರೂ
ಅದೀಗ ಶಿಥಿಲಾವಸ್ಥೆಯಲ್ಲಿದೆ.

ದೂರವಾಣಿ ಇಲಾಖೆಯ ಮೈಕ್ರೋವೇವ್ ಸ್ಟೇಶನ್ (ಈಗ ಮೊಬೈಲ್ ಸ್ಟೇಶನ್) ಇಲ್ಲಿರುವದರಿಂದ ಗುಡ್ಡದ
ತುದಿಯವರೆಗೂ ವಾಹನ ಹೋಗುವಂತಹ ರಸ್ತೆಯಿದೆ. ಈ ರಸ್ತೆಯಿಂದಾಗಿಯೇ ಕೈಲಾಸ ಗುಡ್ಡದಲ್ಲಿನ ಅತ್ಯಮೂಲ್ಯ
ಬೆಲೆ ಬಾಳುವ ಮರಗಳ ಲೂಟಿಯಾಯಿತೆಂದು ಹೇಲಬಹುದು.
ಶಿರಸಿ ಯಲ್ಲಪುರ ರಸ್ತೆಯಲ್ಲಿನ ಭೈರುಂಬೆಗಿಂತ 1.5 ಕಿ.ಮಿ.ಗೆ ಮೊದಲು ಬರುವ ಕಚ್ಚಾ ರಸ್ತೆಯಲ್ಲಿ ಮೂರು ಕಿ.
ಮಿ. ಸಾಗಿದರೆ ಗುಡ್ಡದ ತುದಿ ತಲುಪಬಹುದು. ಕಾಲ್ನಡಿಗೆಯಲ್ಲಿ ಹೋಗ ಬಯಸುವವರು ತಾರಗೋಡ್ ತುದಿ ಮನೆ
ಮಾರ್ಗ ಅಥವಾ ಗುಡ್ಡದ ಬುಡದಲ್ಲಿರುವ ಕಾಳೀಸರದ ಮಾರ್ಗವಾಗಿ ಚಾರಣದ ಮೂಲಕವೂ ಗುಡ್ಡ ಏರಬಹುದು.
ಮೊಲ, ನವಿಲು, ಕಾಡುಕೋಳಿ ಹಾಗೂ ಒಮ್ಮೊಮ್ಮೆ ಜಿಂಕೆ ಹಿಂಡಿನ ದರ್ಶನವೂ ಕಾಲ್ನಡಿಗೆ ಮಾರ್ಗದಲ್ಲಿ ಆಗುತ್ತ
ದೆ. ಕರುನಾಡಿನ ಅತ್ಯಮೂಲ್ಯ ಶ್ರೀಗಂಧ ಹಾಗೂ ಔಷಧಿ ಸಸ್ಯಗಳು ಇಲ್ಲಿ ಹೇರಳವಾಗಿವೆ. ಆದರೆ ಇಲ್ಲಿನ ಶ್ರೀ ಗಂ
ಧ ಕಳ್ಳರ ಕೊಡಲಿಗೆ ಬಲಿಯಾಗಿ ಗುಡ್ಡ ಬರಿದಾಗುತ್ತಿದೆ. ಶಿರಸಿಗೆ ಬಂದಾಗ ಕೈಲಾಸ ಗುಡ್ಡದ ಸೂರ್ಯಾಸ್ತ ನೋಡ
ಲು ಮುದ್ದಾಂ ಬನ್ನಿ.

ಬುಧವಾರ, ಮಾರ್ಚ್ 18, 2009

ಚಿಗುರೆಲೆ...ಈಗ ತಾನೇ ಬ್ಲಾಗ್ ಬರೆಯಲು ಶುರು ಮಾಡಿರೋ ನನ್ನ ಬ್ಲಾಗ್ ಗೆ ಈ ಹೆಸರೇ ಸೂಕ್ತ ಅನ್ನಿಸ್ತು. ತೋಚಿದ್ದನ್ನ ಗೀಚೋಣ ಅಂದ್ಕೊಂಡಿದೀನಿ ಈ ಬ್ಲಾಗಿನಲ್ಲಿ. ಫೋಟೋಗಳ ಜೊತೆ ವ್ಯಂಗ್ಯಚಿತ್ರಗಳನ್ನೂ ಸೇರಿಸ್ಬೇಕು ಅಂದ್ಕೊಂಡಿದೀನಿ.
ಬ್ಲಾಗ್ ನಲ್ಲಿ ಅ ಆ ಬರೆಯಲು ಪ್ರಾರಂಭಿಸಿರೋ ನನ್ನನ್ನು ಕಿವಿ ಹಿಂಡಿ ತಿದ್ದೋ ಕೆಲಸ ನಿಮ್ಮದು. ಉರಿಯಾಗದ ಹಾಗೆ ಕಿವಿ
ಹಿಂಡ್ತೀರಲ್ಲಾ...